ಸರಿದೀತೇ ಕಾರಿರುಳು?

ಸರಿದೀತೇ ಕಾರಿರುಳು
ಈ ದೇಶದ ಬಾಳಿಂದ?
ಸುರಿದೀತೇ ಹೂ ಬೆಳಕು
ಈ ಭೂಮಿಗೆ ಬಾನಿಂದ?

ಅಲುಗಾಡಿದ ಛಾವಣಿ ಮೇಲೆ
ಬಿರುಕಾಗಿವೆ ಗೋಡೆಗಳು,
ನಡುಗುತ್ತಿದೆ ಕಾಲಡಿ ನಲವೇ
ಗುಡುಗುತ್ತಿವೆ ಕಾರ್ಮುಗಿಲು,
ಕೆಳಸೋರಿದೆ ಮಳೆಧಾರೆಯು
ಹರಕಲು ಸೂರಿಂದ,
ಕೊನೆಯೆಂದಿಗೆ ಮನೆಮಂದಿಗೆ
ಈ ಎಲ್ಲ ಪಾಡಿನಿಂದ?

ಮತ ಜಾತಿಯ ಗಡಿ ಭಾಷೆಯ
ವಿಷ ಸೇರಿದ ನೀರಲ್ಲಿ,
ಅಧಿಕಾರದ ಹಣದಾಹದ
ಹುಸಿ ಊರಿದೆ ಬಾಳಲ್ಲಿ;
ಸುರಿದ ಕಸವ ತೊಳೆದು
ಹೊಗೆ ಧೂಪ ತಳಿಯುವ,
ಕುಸಿದಂಥ ಗಾಲಿ ಎತ್ತಿ
ರಥವನ್ನು ಎಳೆಯುವ.

ಈ ಎಲ್ಲವ ಗೆಲ್ಲುವ ಕೆಚ್ಚು
ಕಿಚ್ಚಾಗಿದೆ ಎದೆಯಲ್ಲಿ,
ತಾಯ್ನಾಡಿನ ಉಜ್ವಲ ಚಿತ್ತ
ಅಚ್ಚಾಗಿದೆ ಕಣ್ಣಲ್ಲಿ;
ಜಯಭಾರತ ಜಯಭಾರತ
ಕೋಟಿ ಕಂಠದಲ್ಲಿ
ಮೊಳಗುತ್ತಿದೆ ಬೆಳಗುತ್ತಿದೆ
ನೆಲ ಬಾನು ಜಲಗಳಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯೇ ಬೆಟ್ಟವಾದವನು
Next post ಕೆಲಸವಿಲ್ಲ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys